== 2013 ರ ವಿಧಾನ ಸಭೆ ಚುನಾವಣೆ == 8-12-2013 -ಎಣಿಕೆ ನಂತರ ಮುಖ್ಯ ಮಂತ್ರಿ (ಮೂರು ಚುನಾವಣೆ ಗೆದ್ದಿದ್ದ ) ಶೈಲಾ ದೀಕ್ಷಿತ್ ರಾಜೀನಾಮೆ ಸಲ್ಲಿಸಿದರು. ಶ್ರೀ ಅರವಿಂದ ಕೇಜರೀವಾಲ ಎಎಪಿ ಪಕ್ಷದ ಮುಖ್ಯಸ್ಥ ದಿ. 28-12-2013 ಶನಿವಾರ ದೆಹಲಿ ರಾಮಲೀಲಾ ಮೈದಾನದಲ್ಲಿ ದೆಹಲಿ ಸರ್ಕಾರದ ಮುಖ್ಯ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ನಂತರ ಆರು ಜನ ವಿಧಾನ ಸಭಾ ಸದ್ಯರನ್ನು ತಮ್ಮ ಮಂತ್ರಿ ಮಂಡಲಕ್ಕೇ ಸೇರಿಸಿ ಕೊಂಡು ಖಾತೆಗಳನ್ನ ಹಂಚಿದರು. (ಒಟ್ಟು 7 ಜನರ ಮಂತ್ರಿ ಮಂಡಲ) 2014ರ ಫೆಬ್ರವರಿ 14 ( 14, 2014 ) ರಂದು ಅವರ ಜನ ಲೋಕಪಾಲ ಮಸೂದೆಯ ಕರಡನ್ನು ವಿಧನಸಭೆಯಲ್ಲಿ ಮಂಡಿಸಲು ಆಗದೇ ಇದ್ದರಿಂದ ತಾವು ರಾಜೀನೇಮೇ ನೀಡುವುದಾಗಿ ಹೇಳಿ ದೆಹಲಿಯ ಲೆ. ಗೌರ್ನರಿಗೆ ರಾಜೀನಾಮೆ ಸಲ್ಲಿಸಿದರು. ಯಾವ ಪಕ್ಷವೂ ಸರ್ಕಾರ ರಚನೆಗೆ ಮುಂದಾಗಲಿಲ್ಲ. ಅಂತಿಮವಾಗಿ ವಿಧಾನಸಭೆ­ಯನ್ನು ವಿಸರ್ಜಿಸಲಾಗಿತ್ತು.ಒಂದು ವಾರ ಕಾಲವಾದರೂ ರಾಜ್ಯಪಾಲರು ಎರಡನೇ ಅಧಿಕ ಸ್ಥಾನ ಪಡೆದ (ಮೊದಲ ಆಧಿಕ ಸ್ಥಾನ) ಬಿ.ಜೆ.ಪಿ. ಸರ್ಕಾರ ರಚಿಸಲು ಬಾರದೇಇದ್ದುದರಿಂದ ರಾಷ್ಟ್ರಪತಿ ಆಡ­ಳಿತಕ್ಕೆ ಶಿಫಾರಸು ಮಾಡಿದರು. ಫೆಬ್ರುವರಿ 17ರಂದು ರಾಷ್ಟ್ರಪತಿ ಆಡ­ಳಿತ ಹೇರಲಾಗಿತ್ತು.ರಾಷ್ತ್ರಪತಿ .(ಟೈ.ಆ.ಇಂ.) ಪ - == ದೆಹಲಿ2008/2013ರ ಚುನಾವಣಾ ಫಲಿತಾಂಶ == ೬-೯-೨೦೧೪() == ಪುನಹ 2015 ರಲ್ಲಿ ದೆಹಲಿ ಚುನಾವಣೆ == ಆಮ್‌ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್‌ ಅವರು ಮುಖ್ಯಮಂತ್ರಿಯಾಗಿ 49 ದಿನಗಳ ಅಧಿಕಾರ ನಡೆಸಿ ರಾಜೀನಾಮೆ ನೀಡಿದ ಬಳಿಕ ದಿಲ್ಲಿಯಲ್ಲಿ 2014ರ ಫೆಬ್ರವರಿಯಿಂದ ರಾಷ್ಟ್ರಪತಿ ಆಡಳಿತ ಜಾರಿ. ದಿಲ್ಲಿ ವಿಧಾನಸಭೆ ಚುನಾವಣೆ 2015ರ ಫೆಬ್ರವರಿ 7ರಂದು (ಶನಿವಾರ) ನಡೆಯಲಿದ್ದು, ಮತ ಎಣಿಕೆ ಅದೇ ಫೆ.10ರಂದು (ಮಂಗಳವಾರ) ಎಂದು ಚುನಾವಣೆ ಆಯೋಗ ಪ್ರಕಟಿಸಿದೆ. ಮುಖ್ಯ ಚುನಾವಣೆ ಆಯುಕ್ತ ವಿ.ಎಸ್‌. ಸಂಪತ್‌, 1.30 ಕೋಟಿ ಮತದಾರರು ರಾಷ್ಟ್ರೀಯ ರಾಜಧಾನಿಯ 70 ಕ್ಷೇತ್ರಗಳ ಪ್ರತಿನಿಧಿಗಳನ್ನು ಆಯ್ಕೆ. 11.763 ಮತಗಟ್ಟೆಗಳನ್ನು ಸ್ಥಾಪನೆ ಎಂದು ತಿಳಿಸಿದರು. 2015 ಜನವರಿ 14ರಂದು ಚುನಾವಣೆ ಅಧಿಸೂಚನೆ . ನಾಮಪತ್ರ ಸಲ್ಲಿಸಲು 2015 ಜನವರಿ 21 ಕಡೆಯ ದಿನವಾಗಿದ್ದು, ನಾಮಪತ್ರಗಳ ಪರಿಶೀಲನೆ ಜ.22ರಂದು ನಡೆದಿದೆ. ನಾಮಪತ್ರಗಳನ್ನು ಹಿಂಪಡೆಯಲು 2015 ಜ.24 ಕೊನೆಯ ದಿನವಾಗಿತ್ತು == ಫಲಿತಾಂಶ == ಮತದಾನ 7-2-2015;ಎಣಿಕೆ 10-2-2015 ಮಂಗಳವಾರ: ಚಲಾವಣೆ ಮತದಾನ 67.21% ಒಟ್ಟು ೭೦ ಸ್ಥಾನಗಳು 70/70 ಫಲಿತಾಂಶ/ ಬಿ.ಜೆ.ಪಿ - :೦3 (-29) ಚರ್ಚೆ ದಿ.14-2-2015 ,ಶನಿವಾರ ಬೆಳಗ್ಗೆ 12.15ರ ಸುಮಾರಿಗೆ ಉಪರಾಜ್ಯಪಾಲ ನಜೀಬ್‌ ಜಂಗ್‌, ನೂತನ ಮುಖ್ಯ ಮಂತ್ರಿ ಕೇಜ್ರಿವಾಲ್‌ಗೆ ಗೋಪ್ಯತಾ ವಿಧಿ ಬೋಧಿಸಿದರು. ಜನಲೋಕಪಾಲ ವಿಧೇಯಕ ಅಂಗೀಕಾರವಾಗದ ಕಾರಣಕ್ಕೆ 2014ರ ಫೆ.14ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕೇಜ್ರಿವಾಲ್‌, ಸರಿಯಾಗಿ ಒಂದು ವರ್ಷದ ನಂತರ, ಅದೇ ದಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.. ಸಿಸೋಡಿಯಾ ಡಿಸಿಎಂ: ಬಳಿಕ ದಿಲ್ಲಿಯ ಉಪಮುಖ್ಯಮಂತ್ರಿಯಾಗಿ ಕೇಜ್ರಿವಾಲ್‌ ಬಲಗೈ ಬಂಟ ಎನಿಸಿಕೊಂಡಿರುವ ಮನೀಶ್‌ ಸಿಸೋಡಿಯಾ ಪ್ರಮಾಣವಚನ ಸ್ವೀಕರಿಸಿದರು. ಅವರ ಬಳಿಕ ಆಸೀಮ್‌ ಅಹಮದ್‌ಖಾನ್‌, ಸಂದೀಪ್‌ ಕುಮಾರ್‌, ಸತ್ಯೇಂದ್ರ ಜೈನ್‌, ಗೋಪಾಲ್‌ ರಾಯ್, ಜಿತೇಂದ್ರ ಸಿಂಗ್‌ ತೋಮರ್‌ ಅವರಿಗೂ ಉಪರಾಜ್ಯಪಾಲ ನಜೀಬ್‌ ಜಂಗ್ ಗೋಪ್ಯತಾ ವಿಧಿ ಬೋಧಿಸಿದರು. == ಖಾತೆಗಳ ಹಂಚಿಕೆ == ತಮ್ಮ ಬಳಿ ಯಾವುದೇ ಖಾತೆಗಳನ್ನು ಇಟ್ಟುಕೊಳ್ಳದೆ ಎಲ್ಲವನ್ನೂ ಕೇಜ್ರಿವಾಲ್ ಸಂಪುಟ ಸಹೋದ್ಯೋಗಿಗಳಿಗೆ ಹಂಚಿಕೆ ಮಾಡಿದ್ದಾರೆ. ತಾವು ಎಲ್ಲ ಸಚಿವರ ಖಾತೆಗಳ ಮೇಲ್ವಿಚಾರಣೆ ನಡೆಸಲಿದ್ದಾರೆ . ೧.ಕೇಜ್ರಿವಾಲ್‌ ಅವರು ಜನರೊಂದಿಗೆ ಸಂಪರ್ಕ ಇಟ್ಟುಕೊಳ್ಳುತ್ತಾರೆ. ಅವರು ಜನರನ್ನು ಭೇಟಿಯಾಗಿ ಅವರ ಸಮಸ್ಯೆಗಳಿಗೆ ಕಿವಿಯಾಗುತ್ತಾರೆ. ಸಚಿವರ ಜತೆಗೆ ಶಾಸಕರ ಮೇಲುಸ್ತುವಾರಿಯನ್ನೂ ಅವರು ವಹಿಸಲಿದ್ದಾರೆ. ಕೇಜ್ರಿವಾಲ್ ಸಂಪುಟ ಸಚಿವರ ಖಾತೆಗಳು ಹೀಗಿವೆ 1. ಅರವಿಂದ್ ಕೇಜ್ರಿವಾಲ್ - ಮುಖ್ಯಮಂತ್ರಿ, ಯಾವುದೇ ಖಾತೆ ಇಲ್ಲ. 2. ಮನಿಶ್ ಸಿಸೋಡಿಯಾ- ಉಪ ಮುಖ್ಯಮಂತ್ರಿ, ವಿತ್ತ, ನಗರಾಭಿವೃದ್ಧಿ, ಶಿಕ್ಷಣ ಮತ್ತು ಗುಪ್ತಚರ, 3. ಜಿತೇಂದ್ರ ಸಿಂಗ್ ತೋಮರ್ - ಗೃಹ ಮತ್ತು ಕಾನೂನು, ಕಲೆ ಮತ್ತು ಸಂಸ್ಕೃತಿ, 4. ಸತ್ಯೇಂದ್ರ ಜೈನ್ - ಆರೋಗ್ಯ, ಇಂಧನ, ಲೋಕೋಪಯೋಗಿ, ಕೈಗಾರಿಕೆ, 5. ಸಂದೀಪ್ ಕುಮಾರ್ - ಮಹಿಳಾ ಮತ್ತು ಮಕ್ಕಳ ಕಲ್ಯಾಣ, 6. ಗೋಪಾಲ್ ರಾಯ್‌ - ಸಾರಿಗೆ ಮತ್ತು ಕಾರ್ಮಿಕ, ಉದ್ಯೋಗ ಖಾತೆ, 7. ಆಸಿಮ್ ಅಹ್ಮದ್ ಖಾನ್ - ಆಹಾರ, ನಾಗರಿಕ ಪೂರೈಕೆ, ಪರಿಸರ ಹಾಗೂ ಅರಣ್ಯ == ದೆಹಲಿ ಗೌರ್ನರ್ == ೨೯-೧೨=೨೦೧೬ ದೆಹಲಿಯ ಗೌರ್ನರ್ ನಜೀಬ್ ಜಂಗ್ ರಾಜೀನಾಮೆಯ ನಂತರ, ಬೆಂಗಳೂರು ಮೆಟ್ರೊ ರೈಲು ನಿಗಮದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಅನಿಲ್‌ ಬೈಜಲ್‌ ಅವರು ದೆಹಲಿಯ ನೂತನ ಲೆಫ್ಟಿನೆಂಟ್ ಗವರ್ನರ್‌ ಆಗಿ ನೇಮಕಗೊಂಡಿದ್ದಾರೆ. ಕೇಂದ್ರದ ಗೃಹ ಇಲಾಖೆಯ ಮಾಜಿ ಕಾರ್ಯದರ್ಶಿಗಳೂ ಆಗಿದ್ದ 70 ವರ್ಷದ ಬೈಜಲ್‌ ನೇಮಕವನ್ನು ರಾಷ್ಟ್ರಪತಿ ಪ್ರಣವ್‌ ಅಂಗೀಕರಿಸಿದ್ದಾರೆ. ಡಿಸೆಂಬರ್‌ 30ರಂದು ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. == ನೋಡಿ == ದೆಹಲಿ == ಉಲ್ಲೇಖ == ೧.ವಿಜಯ ಕರ್ನಾಟಕ 12, 2015 ಫಲಿತಾಂಶ - ಟೈಮ್ಸ್ ಆಫ್ ಇಂಡಿಯಾ-೧೦-೨-೨೦೧೫/ ಪ್ರಜಾವಾಣಿ ೧೧-೨-೨೦೧೫.